![](https://www.mitracancare.org/wp-content/uploads/2022/05/leadership_4.png)
ತಜ್ಞರು, ಗೈನೆಕಾಲಜಿಕಲ್ ಆಂಕಾಲಜಿ ಜೊತೆಗೆ ಅಂತರ ರಾಷ್ಟ್ರೀಯ ಅನುಭವ
Dr. ರಾಣಿ ಭಟ್
Dr. ರಾಣಿ ಭಟ್ ಅವರು ತಮ್ಮ ಅಬ್ಸ್ಟೆಟ್ರಿಕ್ಸ್ ಮತ್ತು ಗೈನೆಕಾಲಜಿ ಸ್ನಾತಕೋತ್ತರ ತರಬೀತಿಯನ್ನು ಮುಗಿಸಿಕೊಂಡು, ರಾಯಲ್ ಕಾಲೇಜ್ ಆಫ್ ಅಬ್ಸ್ಟೆಟ್ರೀಸಿಯನ್ಸ್ ಮತ್ತು ಗೈನೆಕಾಲಜಿಸ್ಟ್ಸ್, ಯು. ಕೆ., ಯಲ್ಲಿ ಮಹತ್ವದ ಫೆಲೋಶಿಪ್ ಪಡೆದುಕೊಂಡರು.
ಅವರು ಕೆ. ಕೆ. ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನ್ಯಾಷನಲ್ ಕ್ಯಾನ್ಸರ್ ಆಸ್ಪತ್ರೆ, ಸಿಂಗಾಪುರ್, ಆಸ್ಪತ್ರೆಗಳಲ್ಲಿ ಫೆಲೋಶಿಪ್ ಮಾಡಿಕೊಂಡು ಗೈನಕಾಲಜಿ ಆಂಕಾಲಜಿ ಯಲ್ಲಿ ತರಬೇತಿ ಪಡೆದರು. ಹಾಗೂ ಕ್ವೀನ್ ಮೇರಿ ಆಸ್ಪತ್ರೆ, ಹಾಂಗ್ ಕಾಂಗ್ ನ ಫೆಲೋಶಿಪ್ ಗಳಿಸಿ ಅಲ್ಲಿ ಗೈನೇ ಆಂಕಾಲಜಿ ಮತ್ತು ರೊಬೋಟಿಕ್ ಶಸ್ತ್ರ ಚಿಕಿತ್ಸೆ ಯ ಮುಂದಿನ ತರಬೇತಿ ಪಡೆದರು. ಕಾಲ್ಪೋಸ್ಕೋಪಿ ತರಬೇತಿಯನ್ನು ರಾಯಲ್ ಮಹಿಳೆಯರ ಆಸ್ಪತ್ರೆ, ಮೆಲ್ಬೋರ್ನ್, ಆಸ್ಟ್ರೇಲಿಯಾ ನಲ್ಲಿ ಸ್ವೀಕರಿಸಿದರು.
Dr. ರಾಣಿ ಭಟ್ ಅವರು ವಿಭಾಗೀಯ ಮುಖ್ಯಸ್ಥರು ಹಾಗೂ ಫೆಲೋಶಿಪ್ ನಿರ್ದೇಶಕರು, ಗೈನೆಕಾಲಜಿಕಲ್ ಆಂಕಾಲಜಿ, ಅಪೋಲೋ ಆಸ್ಪತ್ರೆಗಳು, ಬೆಂಗಳೂರು. ಅವರು ಆಸಕ್ತಿ ಉಳ್ಳ ಶೈಕ್ಷಣಿಕರಾಗಿದ್ದು, ಗೈನೆಕಾಲಜಿಕಲ್ ಆಂಕಾಲಜಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಯುವ ಗೈನೆಕಾಲಜಿಸ್ಟ್ಸ್ ರವರಿಗೆ ಸಲಹೆಗಾರರಾಗಿದ್ದಾರೆ. ಮತ್ತು ಗೈನಕಾಲಜಿ ಪಠ್ಯಪುಸ್ತಕಗಳಲ್ಲಿ ಹಲವಾರು ಅಧ್ಯಾಯಗಳನ್ನು ಬರೆದು, ಈ ವಿಷಯದ ಬಗ್ಗೆ ವೈದ್ಯಕೀಯ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ.
ವೈದ್ಯಕೀಯ ತಜ್ಞತೆ
- ಲಾಪರೋಸ್ಕೋಪಿಕ್ ಹಾಗೂ ರೊಬೋಟಿಕ್ ಶಸ್ತ್ರ ಚಿಕಿತ್ಸೆ (ಸರ್ಜರಿ).
- ಗೈನೆಕಾಲಜಿಕಲ್ ಕ್ಯಾನ್ಸರ್ ಗಳು ( ಅಲ್ಟ್ರಾ ರಾಡಿಕಲ್ ಶಸ್ತ್ರ ಚಿಕಿತ್ಸೆ ಒಳಗೊಂಡು, ಹಿಪೆಕ್ HIPEC, ಮತ್ತು ಕಷ್ಟಕರ ಹಾಗೂ ತಿರುಗಿ ಬರುವ ಕ್ಯಾನ್ಸರ್ ಗಳು).
- ಕ್ಯಾನ್ಸರ್ ಅಲ್ಲದ ಕಷ್ಟಕರ ಗೈನೆಕಾಲಜಿಕಲ್ ತೊಂದರೆಗಳು.
- ಸರ್ವೈಕಲ್ ಸ್ಮಿಯರ್ಸ್ ಮತ್ತು ಕಾಲ್ಪೋಸ್ಕೋಪಿ.